ಹಿಂದುಳಿದ ಜಿಲ್ಲೆಗೆ ಹೋರಾಟ ಮಾಡಿದ ನಾಯಕನಿಗೆ ಸಚಿವ ಸ್ಥಾನ ಸಿಗಲೇಬೇಕು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಒತ್ತಾಯ. ಕೆ.ಟಿ ಶಿವುಕುಮಾರ್

ವರದಿ:- ಅರುಣ್ ಕುಮಾರ್.ಎಸ್( ದೊಡ್ಡಉಳ್ಳಾರ್ತಿ) ಚಿತ್ರದುರ್ಗ, ಮೇ. 29 : ಮೂರು ಬಾರಿ ಶಾಸಕರಾಗಿ ಚಳ್ಳಕೆರೆ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯನ್ನಾಗಿ ಅಭಿವೃದ್ದಿಪಡಿಸಿರುವ ಶಾಸಕ ಟಿ.ರಘುಮೂರ್ತಿಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರುಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್.ನಿಜಲಿಂಗಪ್ಪನವರನ್ನು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೇರೆ ಯಾರಿಗೂ ರಾಜಕೀಯವಾಗಿ ಉನ್ನತ ಸ್ಥಾನಮಾನ ಸಿಕ್ಕಿಲ್ಲ. ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆ ಹಿಂದುಳಿದ ಪ್ರದೇಶ. ಚಳ್ಳಕೆರೆಗೆ ಮಂಜೂರಾಗಿದ್ದ ಡಿಗ್ರಿ ಕಾಲೇಜು […]

ಬ್ಯಾಂಕ್‍ನ ಪ್ರಗತಿ ಹಾಗೂ ರೈತರ ಹಿತರಕ್ಷಣೆಗೆ ಬದ್ಧವಾಗಿ ಕೆಲಸ ಮಾಡುವೆ :- ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ಅವಿರೋಧವಾಗಿ ಆಯ್ಕೆ

ವರದಿ :- ಅರುಣ್ ಕುಮಾರ್ .ಎಸ್(ದೊಡ್ಡಉಳ್ಳಾರ್ತಿ) ಚಿತ್ರದುರ್ಗ. ಮೇ.29: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ (ಡಿಸಿಸಿ) ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಚಿವ ಡಿ.ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ, ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಶುಕ್ರವಾರ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ […]

“ಕ್ಷಯರೋಗ ನಿರ್ಮೂಲನೆಗೆ ಜಿಲ್ಲಾಡಳಿತ ಬದ್ಧ : ಡಾ. ಸುಧಾ”

ವರದಿ :- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ) ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಡಾ. ಸುಧಾ ಅವರು ದೊಡ್ಡಉಳ್ಳಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಕ್ಷಯರೋಗ ನಿರ್ಮೂಲನೆ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕ್ಷಯರೋಗ ಮತ್ತು ಮಾತ್ರೆ ವಿತರಕರ ಸಭೆ ನಡೆಸಿ, ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಯ ಪ್ರಗತಿ ಕುರಿತು ಚರ್ಚಿಸಿದರು.ಅದರ ಜೊತೆಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಿ, ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿಗಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳು ಹಾಗೂ ಜೀನಿ ಪೌಡರ್ […]

ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ – ಹಿರಿಯೂರು ರಾಜಕೀಯದಲ್ಲಿ ಶೂನ್ಯ

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರು ಮೇ 10, 2026ರಂದು ಬೆಳಗಿನ ಜಾವ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅವರು 65 ವರ್ಷ ವಯಸ್ಸಾಗಿದ್ದರು. 📌 ಪ್ರಮುಖ ವಿವರಗಳು 🏛️ ರಾಜಕೀಯ ಹಾದಿ 🌾 ಸಾರ್ವಜನಿಕ ಸೇವೆ 🕯️ ಶ್ರದ್ಧಾಂಜಲಿ ಡಿ. ಸುಧಾಕರ್ ಅವರ ನಿಧನದಿಂದ ಹಿರಿಯೂರು ರಾಜಕೀಯದಲ್ಲಿ ದೊಡ್ಡ ಶೂನ್ಯ ಉಂಟಾಗಿದೆ. ಅವರು ಬಡವರ ಬಂಧು, ಶಿಕ್ಷಣ ಪ್ರೇಮಿ, ಹಾಗೂ ಸಹಕಾರ ಕ್ಷೇತ್ರದ ನಾಯಕನಾಗಿ ಜನಮನದಲ್ಲಿ ಸದಾ ಉಳಿಯುತ್ತಾರೆ.

“ಜನಪರ ಬಜೆಟ್: ಕೃಷಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಒತ್ತು”

2026–27ನೇ ಸಾಲಿನ ಬಜೆಟ್ ವೈಶಿಷ್ಟ್ಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ತಮ್ಮ 17ನೇ ಬಜೆಟ್ ಮಂಡಿಸಿ, ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ. ₹4,48,004 ಕೋಟಿ ವೆಚ್ಚದ 2026–27ನೇ ಸಾಲಿನ ಬಜೆಟ್, ಜನಪರ ಯೋಜನೆಗಳು, AI ತಂತ್ರಜ್ಞಾನ, ಮಹಿಳಾ ಕಲ್ಯಾಣ, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದೆ. ಸಿದ್ದರಾಮಯ್ಯ ಬಜೆಟ್ ಇತಿಹಾಸ – 1995ರಿಂದ 2026ರ ವರೆಗೆ ಅವಧಿ ಸರ್ಕಾರ ಬಜೆಟ್ ಸಂಖ್ಯೆ ಪ್ರಮುಖ ಅಂಶಗಳು 1995–1999 […]

ಕಥೆಯ ಕುತೂಹಲ ಹುಟ್ಟಿಸಿದ “ಅಂತರ್ಯಾಮಿ” ಚಿತ್ರದ ಟ್ರೈಲರ್

ಹವ್ಯಾಸಿ ಬರಹಗಾರ: ರೇವಣಸಿದ್ದ ಬಗಲಿ (ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಸ್ಯಾಂಡಲ್ ವುಡ್ ನಲ್ಲಿ ವರ್ಷವಿಡೀ ಒಂದರ ಮೇಲೊಂದು ಅದ್ಬುತ ಕಥೆ ಹಾಗೂ ಒಳ್ಳೆಯ ಮನರಂಜನೆ ಹೊತ್ತು ಸ್ಟಾರ್ ನಟರ ಅಭಿನಯ ಮೂಲಕ ಬೆಳ್ಳಿತೆರೆಗೆ ಸಿನಿಮಾಗಳು ಬರುತ್ತಿವೆ. ಇದರ ಜತೆಗೆ ಹೊಸ ಕಥೆ ಹಾಗೂ ಹೊಸ ನಟ-ನಟಿಯರ ಪ್ರಯತ್ನದ ಮೂವಿಗಳು ಸಹ ಕನ್ನಡ ಸಿನಿ ರಸಿಕರ ಹೃದಯದ ಬಾಗಿಲು ತಟ್ಟಿ ಮನಗೆಲ್ಲುತ್ತಿವೆ. ಸಿನಿಮಾಗಳು ತೆರೆ ಕಾಣುವ ಮೊದಲು ಬಿಡುಗಡೆಯಾಗುವ ಟ್ರೈಲರ್ ಗಳು […]

ದಲಿತ ಸಂಘರ್ಷ ಸಮಿತಿ ಕಾಟಂದೇವರ ಕೋಟೆ ಯಲ್ಲಿ ನೂತನ ಗ್ರಾಮ ಶಾಖೆ,ಮತ್ತು ನಾಮಫಲಕ ಉದ್ಘಾಟನೆ –ಜಾತಿ, ಧರ್ಮ, ವರ್ಗ ಬೇಧಗಳಿಲ್ಲದ ಸಮಾನ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಶಾಶ್ವತ ದಾರಿಟಿ, ವಿಜಿಕುಮಾರ್ ಕರೆ

ವರದಿ :- ಉಳ್ಳಾರ್ತಿ,ಅರುಣ್ ಕುಮಾರ್, ಎಸ್ ಚಳ್ಳಕೆರೆ:- ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಾಟಂದೇವರಕೋಟೆಯಲ್ಲಿ,ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಶಾಖೆ ಮತ್ತು ನಾಮಫಲಕವನ್ನು ಇಂದು ಗೌರವಪೂರ್ವಕವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮವು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶಿಕ್ಷಣದ ಮಹತ್ವವನ್ನು ಒತ್ತಿಹೇಳುವ ವೇದಿಕೆಯಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದಟಿ. ವಿಜಿಕುಮಾರ್ ರವರು, ದಲಿತ ಸಂಘರ್ಷ ಸಮಿತಿಯ ಮೂಲ ಉದ್ದೇಶವು ದಲಿತ ಸಮುದಾಯದ ಹಕ್ಕುಗಳ ರಕ್ಷಣೆ, ಜಾತಿ ಭೇದಭಾವ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸಂವಿಧಾನಾತ್ಮಕ […]

ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆದ್ದವರೇ ನಿಜವಾದ ಸಂತ:ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ

ಅಖಿಲ ಕರ್ನಾಟಕ ಬಂಜಾರ (ಲಂಬಾಣಿ) ಗುರುಪೀಠದ ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ ಮಾತನಾಡಿ. ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯಕ್ಕೆ ಜ್ಞಾನ, ಅರಿವು ಮತ್ತು ಆಶ್ರಯ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನುಟಿ ಗೆದ್ದವರೇ ನಿಜವಾದ ಸಂತ ಎಂದು ಹೇಳಿದರು.ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಜಿಲ್ಲಾಧ್ಯಕ್ಷ ಗಿರೀಶ್ ನಾಯ್ಕ್ ಆರ್ , ವಿಶೇಷ ಉಪನ್ಯಾಸ ನೀಡಿ, ಸಂತ ಸೇವಾಲಾಲ್ ಅವರು ಬುಡಕಟ್ಟು ಜನರಲ್ಲಿ ಧೈರ್ಯ ಸಾಹಸ, […]

ಜೋ ಸೈಮನ್ – ಕನ್ನಡ ಚಿತ್ರರಂಗದ ದಿಗ್ಗಜ

ನಿಧನ: ಫೆಬ್ರವರಿ 13, 2026 ರಂದು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ಹೃದಯಾಘಾತದಿಂದ ಅವರು ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ಸಂಜೆ 4.30ರ ಸುಮಾರಿಗೆ ವೈದ್ಯರು ಅವರನ್ನು ಮೃತರೆಂದು ಘೋಷಿಸಿದರು. ಅವರು 80 ವರ್ಷ ವಯಸ್ಸು ಹೊಂದಿದ್ದರು. ಚಿತ್ರರಂಗದ ಕೊಡುಗೆ: 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಕ, ನಟ ಹಾಗೂ ಲೇಖಕರಾಗಿ ಕೆಲಸ ಮಾಡಿದ್ದರು. ಅವರ ಪ್ರಸಿದ್ಧ ಚಿತ್ರಗಳಲ್ಲಿ ಸಾಹಸ ಸಿಂಹ, ಸ್ನೇಹದ ಕಡಲಲ್ಲಿ, ಸಿಂಹ ಜೋಡಿ, ಮಿಸ್ಟರ್ ವಾಸು ಸೇರಿವೆ.

🏆 ಕರ್ನಾಟಕ ಪ್ಯಾರಾ ಥ್ರೋಬಾಲ್ ತಂಡ-ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ-ಬೆಳ್ಳಿ ಜಯ, ತುಮಕೂರಿನಲ್ಲಿ ಸನ್ಮಾನ

ಪತ್ರಿಕಾ ಪ್ರಕಟಣೆ ಗೆ ಡಿಸೆಂಬರ್ 6 ರಿಂದ 10, 2025 ರಂದು ಶ್ರೀಲಂಕಾ ರತ್ನಾಪುರದಲ್ಲಿ ನಡೆದ ಮೊದಲ ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ಯಾರಾ ಥ್ರೋಬಾಲ್ ಆಟಗಾರರು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ತಂಡವು ಚಿನ್ನದ 🥇 ಪದಕವನ್ನು ಗೆದ್ದಿತು. 1. ಮಂಜಮ್ಮ. 2. ಲಕ್ಷ್ಮಿ. 3. ಮಾಲತಿ ಇನಾಮಂತ್. ಪುರುಷರ ತಂಡವು ಬೆಳ್ಳಿ 🥈 ಪದಕವನ್ನು ಗೆದ್ದಿತು 1. ಪ್ರಕಾಶ್. 21.12.2025 ರಂದು ತುಮಕೂರು ಜಿಲ್ಲೆಯಲ್ಲಿ ಕನ್ನಡ ಸೇನೆಯಿಂದ ನಡೆದ ರಾಜೋತ್ಸವ ಹಾಗೂ ಬೆಳ್ಳಿ […]